ಪ್ರಮುಖ ಅಧಿಕಾರಿಗಳು

ಡಾ. ಎಂ ಆರ್ ರವಿ, ಭಾ.ಆ.ಸೇ

ವ್ಯವಸ್ಥಾಪಕ ನಿರ್ದೇಶಕರು

ಇಅಂಚೆ : md@ksiidc.com

ಡಾ. ಎಂ.ಆರ್.ರವಿ ಇವರು 2012ನೇ ಸಾಲಿನ ಭಾರತೀಯ ಆಡಳಿತ ಸೇವೆಗೆ ಸೇರಿದವರಾಗಿದ್ದಾರೆ. ಶೈಕ್ಷಣಿಕವಾಗಿ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಮತ್ತು ಇಂಗ್ಲೀಷ್ (ಚಿನ್ನದ ಪದಕ) ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಮೈಸೂರು ಪ್ರಮುಖ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿಪರ ಅನುಭವವನ್ನು ಇವರು ಹೊಂದಿದ್ದಾರೆ. ರಾಜ್ಯದ ಕೆ.ಎ.ಎಸ್ ಅಧಿಕಾರಿಯಾಗಿ ವಿವಿಧ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಮುಂದುವರೆದು, ಹುಣಸೂರು ಹಾಗೂ ಕಾರವಾರದ ಉಪ ವಿಭಾಗಗಳ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೊಡಗು ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಮತ್ತು ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಆಯುಕ್ತರಾಗಿ ಮೈಸೂರು ನಗರ ಪಾಲಿಕೆಯಲ್ಲಿ, ನಗರ ಸಭೆ ಶಿವಮೊಗ್ಗ ಹಾಗೂ ಮೈಸೂರು ವಿಭಾಗಗಳಲ್ಲಿ ಅಪರ ಪ್ರಾದೇಶಿಕ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ, ಇದಲ್ಲದೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ, ಮಾನ್ಯ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯಾಗಿ, ಮಂಗಳೂರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಜವಳಿ ಅಭಿವೃದ್ಧಿ ಆಯುಕ್ತರಾಗಿ ಮತ್ತು ಕೈಮಗ್ಗದ ನಿರ್ದೇಶಕರಾಗಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

2018ರಲ್ಲಿ ದಕ್ಷಿಣಾ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಕಾರ್ಯನಿರ್ವಹಿಸುವಾಗ ಇವರು ಸ್ವಚ್ಛ ಭಾರತ ಆಭಿಯಾನದಡಿಯಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ನಂತರ, 2019ರಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ಅತ್ಯುತ್ತಮ ಚುನಾವಣಾ ಆಧಿಕಾರಿ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಇವರು TQM ಹಾಗೂ HRM ನಲ್ಲಿ ಆರ್ಹ ತರಬೇತುದಾರರಾಗಿದ್ದಾರೆ. ಇವರು ಹೊಸ ದೆಹಲಿಯ NIDM ನಿಂದ ವಿಪತ್ತು ನಿರ್ವಹಣೆಯಲ್ಲಿ ತರಬೇತಿಯನ್ನು ಹೊಂದಿದ್ದಾರೆ. ಇವರು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಹಲವಾರು ಪುಸ್ತಕಗಳನ್ನು ಬರೆದು ಸಮೃದ್ದ ಲೇಖಕರಾಗಿದ್ದಾರೆ “Best of Dr.M.R.Ravi”.

ಇವರ ಇತ್ತೀಚಿನ ಲೇಖನ ಅವರ ಅಧಿಕಾರವಧಿಯಲ್ಲಿ ಅವರ ಉತ್ತಮ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುತ್ತಾರೆ.

ಶ್ರೀ ಡಿ.ಪಿ. ಪ್ರಕಾಶ್

ಕಾರ್ಯನಿರ್ವಾಹಕ ನಿರ್ದೇಶಕರು

ಇಅಂಚೆ : ed@ksiidc.com

ಕರ್ನಾಟಕ ಸರ್ಕಾರವು ಶ್ರೀ ಡಿ.ಪಿ. ಪ್ರಕಾಶರವರನ್ನು ಕೆಎಸ್‌ಐಐಡಿಯ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ದಿನಾಂಕ 9.12.20ರಂದು ನೇಮಿಸಿರುತ್ತದೆ ಹಾಗೂ ಅದರಂತೆ ಸದರಿಯವರು ಅಧಿಕಾರ ವಹಿಸಿಕೊಂಡಿರುತ್ತಾರೆ. ಇವರು ಸರ್ಕಾರದ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಾಹಿಸಿರುತ್ತಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ, ಉಪಆಯುಕ್ತರಾಗಿ, ಜಂಟಿ ಆಯುಕ್ತರಾಗಿ ಕಾರ್ಯನಿರ್ವಾಹಿಸಿರುತ್ತಾರೆ. ಮಾನ್ಯ ಸಭಾಪತಿಗಳ ಆಪ್ತ ಕಾರ್ಯದರ್ಶಿಯಾಗಿ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಾಹಿಸಿರುತ್ತಾರೆ. ಸರ್ಕಾರಿ ಸೇವೆಯನ್ನು ಆರಂಭಿಸುವ ಮುನ್ನ ಜೈನ್ ಸಮೂಹ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಸದರಿಯವರು ವಾಣಿಜ್ಯ ಮತ್ತು ತೆರಿಗೆ ಇಲಾಖೆಯಲ್ಲೂ, ಸರಕು ಮತ್ತು ಸೇವಾ ತೆರಿಗೆ (GST) ಹಾಗೂ ತೆರಿಗೆಯನ್ನು ಮೂಲದಲ್ಲಿ ಕಡಿತಗೊಳಿಸುವ ವಿಷಯದ (TDS) ಬಗ್ಗೆ ಪರಿಣಿತ ತರಬೇತುದಾರರಾಗಿ ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ಸರಣಿ ಉಪನ್ಯಾಸಗಳನ್ನು ನೀಡಿದ್ದಾರೆ. ರಪ್ತು ವಿಚಾರವಾಗಿ ಎಸ್ ಇ ಜೆಡ್ ಮತ್ತು ಇಓಯುಗಳ ಸಮಸ್ಸೆಗಳನ್ನು ಪರಿಹರಿಸುವ ಅನುಭವಗಳನ್ನು ಹೊಂದಿರುತ್ತಾರೆ. ಅವರು ನಾಯಕತ್ವ ಕೌಶಲ್ಯ, ವ್ಯಕ್ತಿತ್ವ ಅಭಿವೃದ್ಧಿ ಮತ್ತು ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ ಉತ್ತಮ ಭಾಷಣಗಾರರು. ಅವರ ವಿವಿಧ ವಿಷಯಗಳ ಕುರಿತು ಲೇಖನಗಳು, ಸಂಶೋಧನಾ ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ, ಅನೇಕ ನೇರ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಮತ್ತು ಚರ್ಚಾ ನಿರ್ವಾಹಕರಾಗಿ ಕಾರ್ಯನಿರ್ವಾಹಿಸಿರುತ್ತಾರೆ. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಮತ್ತು 1998 ರ ಬ್ಯಾಚ್ನಲ್ಲಿ ಗ್ರೂಪ್ ‘ಎ’ ಅಧಿಕಾರಿಯಗಿ ಸರ್ಕಾರಿ ಸೇವೆಯನ್ನು ಆರಂಭಿಸಿರುತ್ತಾರೆ.

ಶ್ರೀ ಎನ್.ಕೆ. ಪರಶುರಾಮ್

ಪ್ರಧಾನ ವ್ಯವಸ್ಥಾಪಕರು

ಇಅಂಚೆ : parashuram@ksiidc.com

ಮೈಸೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕೇಂದ್ರ ಸರಕಾರದ ಯೋಜನೆಯೊಂದರಲ್ಲಿ (ಐಸಿಎಅರ್-ಕೆವಿಕೆ) ಸೇವೆ ಪ್ರಾರಂಭ. ೧೯೯೨ರಲ್ಲಿ ಕೆಎಸ್ಐಐಡಿಸಿಗೆ ಸೇರ್ಪಡೆ ಮತ್ತು ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಣೆ. ಸದ್ಯ ವಸೂಲಾತಿಯ ಮುಖ್ಯಸ್ಥರಾಗಿರುತ್ತಾರೆ.

ಶ್ರೀ ವೈ. ಶ್ರೀನಿವಾಸಪ್ಪ, (ಪ್ರಭಾರ)

ಪ್ರಧಾನ ವ್ಯವಸ್ಥಾಪಕರು

ಇಅಂಚೆ : sreenivasappa.ksiidc@gmail.com

ಶ್ರೀ. ಈಶ್ವರ

ಉಪ ಪ್ರಧಾನ ವ್ಯವಸ್ಥಾಪಕರು

ಇಅಂಚೆ : eswara.ksiidc@gmail.com

ಶ್ರೀ. ಆರ್.ವಿ.ಭೂತಪ್ಪ

ಉಪ ಪ್ರಧಾನ ವ್ಯವಸ್ಥಾಪಕರು

ಇಅಂಚೆ : rvbhutappa.ksiidc@gmail.com

ಶ್ರೀ.ಡಾ. ತಾನಾಜಿ ರಾಥೋಡ್

ಉಪ ಪ್ರಧಾನ ವ್ಯವಸ್ಥಾಪಕರು

ಇಅಂಚೆ : tanajirathod.ksiidc@gmail.com

ಡಾ. ತಾನಾಜಿ ರಾಥೋಡ್ ಅವರು ಕೆಎಸ್‌ಐಐಡಿಸಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ, ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 1996 ರಲ್ಲಿ ನಿಗಮಕ್ಕೆ ಉಪ ವ್ಯವಸ್ಥಾಪಕರಾಗಿ ಸೇರಿದ್ದಾರೆ ಮತ್ತು ಹಣಕಾಸು ಮತ್ತು ಖಾತೆಗಳು, ಯೋಜನೆ ಬೆಳವಣಿಗೆಗಳು, ಹಣಕಾಸು ಸೇವೆಗಳು ಮತ್ತು ವ್ಯಾಪಾರಿ ಬ್ಯಾಂಕಿಂಗ್, ಕೈಗಾರಿಕಾ ಸಾಲಗಳ ಮರುಪಡೆಯುವಿಕೆ, ಐಟಿ ಬಿಟಿ ಉದ್ಯಾನವನಗಳು, ವಿಮಾನ ನಿಲ್ದಾಣ ಯೋಜನೆಗಳು, ಪಿಪಿಪಿ ಯೋಜನೆಗಳು, ಕಾನೂನು ವಿಷಯಗಳು ಮುಂತಾದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಪ್ರಧಾನ ಕಚೇರಿ, ಮಂಗಳೂರು ಮತ್ತು ಗುಲ್ಬರ್ಗಾ ವಲಯ ಕಚೇರಿಗಳಲ್ಲಿ ವಿವಿಧ ಧನಸಹಾಯ-ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಅವರು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಐಐಎಂ ಮತ್ತು ಐಐಟಿಗಳಲ್ಲಿ ವಿವಿಧ ತಾಂತ್ರಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇಲ್ಲಿಯವರೆಗೆ, ಅವರ ಹನ್ನೆರಡು ಸಂಶೋಧನಾ ಪ್ರಬಂಧಗಳನ್ನು ವಿದ್ಯುತ್ ವಲಯ, ಹಣಕಾಸು, ಲೆಕ್ಕಪರಿಶೋಧಕ ಇತ್ಯಾದಿಗಳ ವಿವಿಧ ಪರಿಶೀಲನಾ ನಿಯತಕಾಲಿಕಗಳಲ್ಲಿ ಪ್ರಕಟಿಸಲಾಗಿದೆ. ಅವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ, ನಿರ್ವಹಣಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ ಒಳಗಾಗಿದ್ದಾರೆ ಮತ್ತು ಐಐಎಂಬಿ, ವಿಶ್ವಬ್ಯಾಂಕ್ ಗುಂಪು, ಎಟಿಐ ಇತ್ಯಾದಿಗಳಲ್ಲಿ ಪಿಪಿಪಿ ಕೋರ್ಸ್‌ಗಳನ್ನು ಮಾಡಿದ್ದಾರೆ. .,

ಶೈಕ್ಷಣಿಕವಾಗಿ, ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಹಣಕಾಸು ಮತ್ತು ಲೆಕ್ಕಪತ್ರದಲ್ಲಿ ಪಿಎಚ್‌ಡಿ, ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಎಂಬಿಎ-ಫೈನಾನ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಸಾಮಾಜಿಕ ವಲಯದ ಅಭಿವೃದ್ಧಿ ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅವರು ಮಾಡಿದ ಕಾರ್ಯಗಳಿಗಾಗಿ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದ್ದಾರೆ. ಅವರ ಪ್ರಸ್ತುತ ಸಂಶೋಧನಾ ಆಸಕ್ತಿಯು ಪಿಪಿಪಿ, ಸಾಮಾಜಿಕ-ಆರ್ಥಿಕ ನೀತಿಗಳು, ಕಾರ್ಪೊರೇಟ್ ಕಾನೂನುಗಳು ಇತ್ಯಾದಿಗಳಲ್ಲಿನ ಕಾನೂನು ವಿಷಯಗಳ ವಿಷಯವಾಗಿದೆ.

ಶ್ರೀ ಧಕ್ಷಿಣಾಮೂರ್ತಿ

ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು

ಇವರು 1997 ರಲ್ಲಿ ಉಪ ವ್ಯವಸ್ಥಾಪಕರಾಗಿ ಕೆ.ಎಸ್.ಐ.ಐ.ಡಿ.ಸಿ ನಿಗಮಕ್ಕೆ ಸೇರ್ಪಡೆಯಾಗಿರುತ್ತಾರೆ. ಇವರು ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಶಿವಾಜಿ ಯೂನಿವರ್ಸಿಟಿ, ಕೊಲ್ಹಾಪುರದಿಂದ ಪಡೆದಿರುತ್ತಾರೆ. ನಿಗಮದಲ್ಲಿ ಇವರು ವಿವಿಧ ವಿಭಾಗಗಳಲ್ಲಿ ಅಂದರೆ ವಸೂಲಾತಿ, ಅಪ್ರೈಸಲ್, ಮೂಲಸೌಲಭ್ಯ ಯೋಜನಾ ವಿಭಾಗ, ಹಣಕಾಸು ಮತ್ತು ಲೆಕ್ಕ ಪತ್ರ ವಿಭಾಗ, ಆಂತರಿಕ ಲೆಕ್ಕ ಪರಿಶೋಧನಾ ವಿಭಾಗದಲ್ಲಿ ಹಾಗೂ ಆಹಾರ ಕರ್ನಾಟಕ ನಿಯಮಿತದಲ್ಲಿ ಉಪ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸಿರುತ್ತಾರೆ.

ಕೆಲಸದ ಸಮಯ

ಸಂಪರ್ಕಿಸಿ